ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ – ವಿಜಯಲಕ್ಷ್ಮೀ ದಂಪತಿಗೆ 23 ನೇ ವೈವಾಹಿಕ ವಾರ್ಷಿಕ ದಿನದ ಸಂಭ್ರಮ. ಆದರೆ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ.
ವಿವಾಹ ದಿನವನ್ನು ಸಂಭ್ರಮಿಸಲಾಗದೆ ದರ್ಶನ್ ಕುಗ್ಗಿದ್ದಾರೆ. ಅವರ ಪತ್ನಿ ಕೂಡ ನಿರಾಶರಾಗಿದ್ದಾರೆ. ಆದರೆ ತಮ್ಮ ನೆಚ್ಚಿನ ದಂಪತಿಗೆ ಅಭಿಮಾನಿಗಳು ವೈವಾಹಿಕ ದಿನದ ಶುಭಾಶಯ ತಿಳಿಸಿದ್ದಾರೆ. ಎಲ್ಲವೂ ಸರಿ ಆಗಲಿದೆ ಎಂದು ಧೈರ್ಯ ತುಂಬುತ್ತಿದ್ದಾರೆ. ವಿವಾಹದ ದಿನವೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಜಾಲತಾಣದಲ್ಲಿ ಪತಿ ಭಾವಚಿತ್ರ ಹಂಚಿಕೊಂಡಿದ್ದಾರೆ.
ಇದರ ನಡುವೆ ದರ್ಶನ್ – ವಿಜಯಲಕ್ಷ್ಮೀ ಅವರ ಮದುವೆ ಪತ್ರಿಕೆ ಜಾಲತಾಣದಲ್ಲಿ ವೈರಲ್ ಆಗಿದೆ. 2003 ರ ಮೇ 19 ರಂದು ಧರ್ಮಸ್ಥಳದ ವಸಂತ ಮಹಲ್ನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರ ವಿವಾಹ ನಡೆದಿತ್ತು. ಪದವೀಧರೆ ಆಗಿರುವ ವಿಜಯಲಕ್ಷ್ಮೀ ಅವರ 23 ವರ್ಷಗಳ ಹಿಂದೆ ನಟ ದರ್ಶನ್ ಜತೆಗೆ ವಿವಾಹ ಆಗಿದ್ದರು. ಇವರಿಗೆ ವಿನೀಶ್ ಎಂಬ ಪುತ್ರ ಇದ್ದಾನೆ.




